ಸೇವ ನಮಿರಾಜ ಮಲ್ಲ ರು ೧೯೨೫ ಜನೆವರಿ ೨೬ ರಂದು ಜನಿಸಿದರು. ಮದರಾಸು ವಿಶ್ವವಿದ್ಯಾಲಯ ದಿಂದ ಈಗಿನ ( ಚೆನ್ನೈ) ,ಬಿ.ಏ.ಎಮ್.ಏ ಮತ್ತು ಬಿ.ಎಲ್ ಪದವಿಗಳನ್ನು ಪಡೆದ ಮಲ್ಲರು ಕೆಲ ಕಾಲ ಮದ್ರಾಸಿನ ಅಮೆರಿಕನ್ ವಾರ್ತಾ ಸಂಸ್ಥೆಯಲ್ಲಿ () ಭಾಷಾಂತರ ಸಹಾಯಕರಾಗಿದ್ದರು.'ಲಿಬರೇಟರ್' ಎಂಬ ದೈನಿಕಕ್ಕೆ ಹಾಗು ' ಟೈಮ್ಸ್ ಆಫ್ ಇಂಡಿಯಾ 'ಕ್ಕೆ ಕೆಲ ಕಾಲ ಉಪಸಂಪಾದಕರಾಗಿ ದುಡಿದರು. ವಕೀಲರಾಗಿ ಕೆಲ ಕಾಲ ಕೆಲಸ ಮಾಡಿ, ನ್ಯಾಯಾಂಗಕ್ಕೆ ಸೇರಿ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು.ಅಲ್ಲದೆ ನ್ಯಾಯಾಲಯದ ಕಲಾಪಗಳೆಲ್ಲವು ಕನ್ನಡದಲ್ಲಿ ನಡೆದಾಗಲೇ ಕನ್ನಡಕ್ಕೆ ಸರಿಯಾದ ಸ್ಥಾನಮಾನ ದೊರತಂತೆ ಎಂದು ಹೇಳುತ್ತಿದ್ದರು. ಸೇವ ನಮಿರಾಜ ಮಲ್ಲರ ಕೃತಿಗಳು == ಕಾದಂಬರಿ == ರಕ್ತದ ರೂಪಾಯಿ ದೇವರ ದಾರಿ ಬದುಕಿನ ಸುಳಿಯಲ್ಲಿ ಬಂಧನ ಬಾಂಧವ್ಯ ತೀರಿದ ಆಸೆ ಕುರುಡು ಚಕ್ರ ಭ್ರಮಾಧೀನ ನಿಜಸುತ ಕರಿಚರ್ಮ ಉಳಿವುದೇ ಕೀರ್ತಿ == ಕಥಾ ಸಂಕಲನ == ಲೋಹದ ಜೀವ ಮರದ ಮರೆಯಲ್ಲಿ == ಅನುವಾದ == ಎಮರ್ಸನ್ನನ ಮೂಲ ಬರಹಗಳು ಸ್ವಾತಂತ್ರ್ಯದ ಕಿಡಿಗಳು ಸೇವ ನಮಿರಾಜ ಮಲ್ಲರು ೧೯೯೧ ಜನೆವರಿ ೧೮ ರಂದು ನಿಧನರಾದರು.